`ದಂಡುಪಾಳ್ಯ` ಭಾಗ ೨ ಚಿತ್ರಕ್ಕೆ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ
Posted date: 19 Thu, May 2016 – 11:50:11 AM

ವೆಂಕಟ್ ಮಾವೀಸ್ ಲಾಂಛನದಲ್ಲಿ ವೆಂಕಟ್(ನಾಟಿಕೋಳಿ) ಅವರು ನಿರ್ಮಿಸುತ್ತಿರುವ ಹಾಗೂ ಶ್ರೀನಿವಾಸರಾಜು ನಿರ್ದೇಶಿಸುತ್ತಿರುವ  ‘ದಂಡುಪಾಳ್ಯ ಭಾಗ ೨ ಚಿತ್ರದ ಚಿತ್ರೀಕರಣ ಬೆಂಗಳೂರಿನಲ್ಲಿ ಬಿರುಸಿನಿಂದ ಸಾಗಿದೆ. ಒಟ್ಟು ೨೫ ದಿನಗಳ ಕಾಲ ಬೆಂಗಳೂ ಸುತ್ತಮುತ್ತ ಎರಡನೇ ಹಂತದ ಚಿತ್ರೀಕರಣ ನಡೆಯಲಿದೆ.   
   ದಂಡುಪಾಳ್ಯ ಚಿತ್ರವನ್ನು ನಿರ್ದೇಶಿಸಿದ್ದಶ್ರೀನಿವಾಸರಾಜು ಅವರೆ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಕಥೆ, ಚಿತ್ರಕಥೆಯನ್ನು ನಿರ್ದೇಶಕರೆ ಬರೆದಿದ್ದಾರೆ. ಅರ್ಜುನ್ ಜನ್ಯ ಸಂಗೀತ ನಿರ್ದೇಶನ, ವೆಂಕಟ್‌ಪ್ರಸಾದ್ ಛಾಯಾಗ್ರಹಣ, ರವಿಚಂದ್ರನ್ ಸಂಕಲನ, ಹಾಗೂ ಪ್ರಭು ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಡಾ||ವಿ.ನಾಗೇಂದ್ರಪ್ರಸಾದ್ ಬರೆದಿದ್ದಾರೆ. ಪೂಜಾಗಾಂಧಿ, ಮಕರಂದ ದೇಶಪಾಂಡೆ, ರವಿಕಾಳೆ, ಕರಿಸುಬ್ಬು, ರವಿಶಂಕರ್, ಶ್ರುತಿ, ಸುಚೀಂದ್ರಪ್ರಸಾದ್, ಯತಿರಾಜ್, ಮುನಿ, ಡ್ಯಾನಿ, ಜಯದೇವ್, ಪೆಟ್ರೋಲ್ ಪ್ರಸನ್ನ, ಸಂಜನ ಮುಂತಾದವರಿದ್ದಾರೆ. ನಟಿ ಸಂಜನಾ ವಿಶೇಷಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.


Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed